Saturday, November 27, 2010

"ಈ ರಾಜ್ಯಕ್ಕೆ ಕರ್ನಾಟಕ ಎಂಬ ಹೆಸರು ಹೇಗೆ ಬಂದಿತು ? ಅದರ ಕಥೆ  ಇಲ್ಲಿದೆ"



                    ಇಪ್ಪತ್ತು ವರ್ಷಗಳ ಹಿಂದೆ, 1973ರಲ್ಲಿ, ಈ ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣವಾಯಿತು. ರಾಜ್ಯ ಆದನಂತರ ಇದಕ್ಕೋಸುಗ ಕನ್ನಡನಾಡಿನ ಜನರು 17 ವರ್ಷಗಳವರೆಗೆ  ಕಾಯಬೇಕಾಯಿತು.

             ಕರ್ನಾಟಕಕ್ಕೆ ಯಾವುದು ಬಂದರೂ ತಡವಾಗಿಯೇ ಬಂದಿದೆ. ಕನ್ನಡ ಪ್ರದೇಶಗಳು ಏಕೀಕರಣಗೊಂಡು ಒಂದು ರಾಜ್ಯ ಆಗಬೇಕಾದರೆ  ತುಂಬ ತಡವಾಗಿ ಆಯಿತು. ಕನ್ನಡ ಜನರ ಕನಸು ಆಂಧ್ರರಿಗಿಂತ  ಹಳೆಯದಾಗಿದ್ದರೂ,   ಕರ್ನಾಟಕವು ಆಂಧ್ರ ಆದ ನಂತರವೇ ಆಯಿತು.


                   ರಾಜ್ಯವೇನೋ ಆಯಿತು, ಆದರೆ, ಆಗಬೇಕಾದಾಗ ಆಗಲಿಲ್ಲ. ಆಗಬೇಕಾದಂತೆಯೂ ಆಗಲಿಲ್ಲ.

                  ಭಾರತ ಸರಕಾರವು ನೇಮಕ ಮಾಡಿದ ರಾಜ್ಯ ಪುನಃರ್ಘಟನಾ ಆಯೋಗವು , ತನ್ನ  ವರದಿಯಲ್ಲಿ ತಾನು ಶಿಫಾರಸ್ಸು ಮಾಡಿದ ನೂತನ ರಾಜ್ಯಕ್ಕ ಕರ್ನಾಟಕವೆಂಬ  ಹೆಸರನ್ನು ಕೊಟ್ಟಿದ್ದರೂ, ಮೈಸೂರಿನ ಕರ್ಮಠರ ಒತ್ತಾಯಕ್ಕೆ ಮಣಿದು, ಕನ್ನಡನಾಡಿನ  ಆರಾಧಕರು ಅದನ್ನು ಮೈಸೂರು ಎಂದು ಒಪ್ಪಿಕೊಳ್ಳಬೇಕಾಯಿತು.

                   ಆ ಪ್ರಸಂಗವು ಸೋಲೋಮನ್ ನ ಒಂದು ಕಥೆಯನ್ನು ನೆನಪಿಗೆ ತಂದುಕೊಡುತ್ತದೆ. ಇಬ್ಬರು ತಾಯಂದಿರು ಒಂದು ಮಗುವಿಗೊಸುಗ  ಅದು ನನ್ನದು ತನ್ನದು ಎಂದು ಜಗಳವಾಡುತ್ತಿದ್ದರು.
                    ಅವರ ವ್ಯಾಜ್ಯ, ಪರಿಹಾರಕ್ಕೋಸುಗ, ದೊರೆ ಸೊಲೊಮನ್ ನವರೆಗೆ ಹೋಯಿತು. ಅವರಿಬ್ರಲ್ಲಿ ಆ ಕೂಸಿನ ನಿಜವಾದ ತಾಯಿ ಯಾರು ? ತಾಯಿಯ ಸೋಗು ಹಾಕಿ ತನ್ನ ಹಕ್ಕುದಾರಿಕೆ ಮುಂದೆ ಮಾಡಿದವರು ಯಾರು?
                   ಸೊಲೊಮನ್ ನು ಒಂದು ಉಪಾಯ ಯೋಚಿಸಿ, ಆ ಮಗುವನ್ನು  ತುಂದು ಮಾಡಿ ಒಬ್ಬಳಿಗೆ ಒಂದು ಭಾಗ, ಇನ್ನೊಬ್ಬಳಿಗೆ  ಒಂದು ಭಾಗ  ಕೊಡುವುದಾಗಿ ತೀರ್ಮಾನಿಸಿದ.










                     ಈ ತೀರ್ಮಾನವನ್ನು  ಕೇಳಿ, ತಾಯಿಯ ಸೋಗು ಹಾಕಿದವಳು ಸುಮ್ಮನಿದ್ದಳು. ಆದರೆ ನಿಜವಾದ ತಾಯಿಯಾದವಳ ಕರುಳು ಕೊರೆಯಿತು. ಮಗುವನ್ನು ತುಂಡು ಮಾಡುವ ವಿಚಾರ ಕೇಳಿದ ಅವಳು "ಬೇಡ, ಆ ಮಗುವನ್ನು ಅವಳಿಗೆ ಕೊಟ್ಟು ಬಿಡಿ" ಎಂದು ಹೇಳಿದಳು.

                    ಹೇಗಾದರೂ ಕರ್ನಾಟಕ ರಾಜ್ಯ ಆಗಬೇಕೆಂದು ಕನವರಿಸುತ್ತಿದ್ದ ಜನರು, ಮೈಸೂರು ಹೆಸರನ್ನು ಒಪ್ಪಿಕೊಂಡು, ನಾಡು, ಏಕೀಕರಣಗೊಳ್ಳಲೆಂದು ಅಪೇಕ್ಷಿಸಿದರು.

                   ಆನಂತರ ಅನೇಕ ಸಲ ವಿಧಾನಸಭೆಯಲ್ಲಿ ಕರ್ನಾಟಕದ ಹೆಸರಿನ ಪ್ರಸ್ತಾಪ ಬಂದು, ಮೈಸೂರು ವಾದಿಗಳ ಹಟದಿಂದ,  ಅದು ಹಿಂದೆ ಸರಿಯಿತು. ದೊಡ್ಡಮೇಟಿ ಅಂದಾನಪ್ಪನವರಂತೂ ಕರ್ನಾಟಕ ಹೆಸರಿನ ಬಗೆಗೆ ಹೊಟ್ಟೆಬೇನೆಯನ್ನೇ ಹಚ್ಚಿಕೊಂಡಿದ್ದರು. ಅವರು ಕರ್ನಾಟಕ, ಕನಾಟಕ ಎಂದು ಕನವರಿಸುತ್ತಲೇ ಕಣ್ಣು  ಮುಚ್ಚಿದರು.

                  ರಾಜ್ಯಕ್ಕೆ ಕರ್ನಾ ಟಕ ಎಂಬ ಹೆಸರು ಹೇಗೆ ಬಂದಿತು ಎನ್ನುವುದು ಜನರಿಗೆ ತಿಳಯುವುದು ಅಗತ್ಯವಿದೆ. ಕರ್ನಾಟಕದ  ಹೆಸರು ದೇವರಾಜ ಅರಸರು ತಂದರೆನ್ನುವ ಕಿರೀಟವನ್ನು  ಆಗಿನ ಮುಖ್ಯಮಮತ್ರಿ ದೇವರಾಜ ಅರಸರ ತಲೆಯ ಮೇಲೆ ಇರಿಸಲಾಗಿದೆ. ಅವರು ಕರ್ನಾಟಕ ಹೆಸರಿನ ಬಗೆಗೆ ವಿರೋಧವಾಗಿದ್ದರೂ, ರಾಜ್ಯಕ್ಕೆ ಹೆಸರು ತಂದ  ಬಹುಮಾನವನ್ನು ಅವರು ಪಡೆದುಕೊಂಡರು.

                  ದೇವರಾಜ ಅರಸರು ಕರ್ನಾಟಕ  ಎಂಬ ಹೆಸರನ್ನು ಸದನದ ಒಳಗೆ ಮತ್ತು ಹೊರಗೆ,  ಎರಡೂ  ಕಡೆಗಳಲ್ಲಿ ವಿರೋಧಿಸಿದ್ದರು. ಕರ್ನಾಟಕ ಆಗುವಾಗ ಮತ್ತು ಆ ಮೇಲೆ,  ಅವರು ಈ ಹೆಸರನ್ನು ನಖಶಿಖಾಂತವಾಗಿ ಎದುರುಸಿದ್ದರು. ಮೈಸೂರು ಹೆಸರನ್ನು ಬಿಟ್ಟುಕೊಡಲು ಅವರು ಸುತರಾಂ ಸಿದ್ಧರಿರಲಿಲ್ಲ.

                    1972ರಲ್ಲಿ ಹೊಸ ಚುನಾವಣೆಗಳು ನಡೆದ ದೇವರಾಜ ಅರಸರು  ಮುಖ್ಯಮಂತ್ರಿಯಾದರು. ಆಗಲೂ   ಅವರು ಕರ್ನಾಟಕ ಹೆಸರಿನ ಬಗೆಗೆ  ಅನುಕೂಲ ಭಾವನೆ ಹೊಂದಿರಲೇ ಇಲ್ಲ. ಪ್ರತಿರೋಧ ಭಾವನೆ ಇರಿಸಿಕೊದರು.
                    ಕರ್ನಾಟಕ ಹೆಸರಿನ ಬಗೆಗೆ ಆಗ ಬಹು ನಿಖರದ ಹೋರಾಟ ಹೂಡಿದವರೆಂದರೆ,  ಹಾಸನದ ಶಾಸಕರದ ಕೆ.ಎಂ.ರುದ್ರಪ್ಪನವರು. ಅವರು ಹಿಂದಿನಿಂದಲೂ ಕರ್ನಾಟಕ ಏಕೀಕರಣವಾದಿಗಳು. 

                  1948ರಲ್ಲಿ  ದಾವಣಗೆರೆಯಲ್ಲಿ  ನಡೆದಿದ್ದ ಕರ್ನಾಟಕ ಯುವಕ ಪರಿಷತ್ತಿಗೆ  ಅವರು  ಅಧ್ಯಕ್ಷರಾಗಿದ್ದರು.

                   ಕರ್ನಾಟಕ ಏಕೀಕರಣದ ಬಗೆಗೆ ಒತ್ತಾಯ ಪಡಿಸುದೇ ಆ ಯುವಕ ಪರಿಷತ್ತಿನ ಉದ್ದೇಶವಾಗಿದ್ದಿತು.

                  ಈ ಕರ್ನಾಟಕ ರಾಜ್ಯವು ಮೈಸೂರು ಎಂಬ ಹೆಸರನು ಪಡೆದು  ಅಸ್ತಿತ್ವಕ್ಕೆ ಬರಬೇಕೆನ್ನುವುದು ಆಗ ಯಾರೊಬ್ಬರ ಕನಸು ಮನಸ್ಸಿನಲ್ಲಿಯೂ  ಇರಲಿಲ್ಲ.

                    ಶಾಸಕ ರುದ್ರಪ್ಪನವರು ರಾಜ್ಯದ ಹೆಸರನ್ನು ಮೈಸೂರಿಗೆ ಬದಲಾಗಿ  ಕನಾಟಕ ಮಾಡಬೇಕೆಂದು ಮುಖ್ಯಮಂತ್ರಿ ದೇವರಾಜ ಅರಸರೆದುರು ಪ್ರಸ್ತಾಪಿಸಿದರು.

                  ಆದರೆ,ಅವರು ಆ ವಿಚಾರವನ್ನು, ಸಹಾನುಭೂತಿಯಿಂದ ಕಾಣಲಿಲ್ಲ.   'ನಿಮಗೆಲ್ಲೋ ಹುಚ್ಚು' ಎನ್ನುವ ಧಾಟಿಯಲ್ಲಿ ಅವರು ಮಾತನಾಡಿದರು.

                 ಮೈಸೂರು ಎಂಬ ಹೆಸರನ್ನು ಒಪ್ಪಿಕೊಂಡ ಕಾರಣದಿಂಲೇ  ಕನ್ನಡ  ನಾಡಿನ ಪ್ರದೇಶಗಳು ಒಂದಾಗುವುದು ಸಾಧ್ಯವಾಯಿತು. ಇಲ್ಲದಿದ್ರೆ ಮೈಸೂರು ಈ ರಾಜ್ಯ ಪುನಃರ್ಘಟನೆಗೆ ಒಪ್ಪುತ್ತಲೇ  ಇರಲಿಲ್ಲವೆಂದು   ದೇವರಾಜ ಅರಸರು ರುದ್ರಪ್ಪನವರನ್ನು ಅವರ  ಪ್ರಯತ್ನದಿಂದ ತಡೆಯಲು ಯತ್ನಿಸಿದರು.

                ಆದರೆ, ರುದ್ರಪ್ಪನವರು ಗೆಲಿಲಿಯೋ ಮಾದರಿಯವರು. ಭೂಮಿಯು ಸೂರ್ಯನ ಸುತ್ತಲೂ ಚಲಿಸುವುದೆಂದು, ಗೆಲಿಲಿಯೋ  ತನ್ನ  ನಿಲುವಿಗೆ ಗಟ್ಟಿಯಾಗಿ  ಅಂಟಿಕೊಂಡು  ನಿಂತಂತೆ, ಅವರು ರಾಜ್ಯಕ್ಕೆ ಕರ್ನಾಟಕ ಎಂಬ ನೈಜ ಹೆಸರೇ ಇರಬೇಕೆನ್ನುವ ತಮ್ಮ ನಿಲುವಿಗೆ ಭದ್ರವಾಗಿ ಅಂಟಿಕೊಂಡು ನಿಂತರು.
                  ಅವರು ಸಮಾ ಅಭಿಪ್ರಾಯದ ಶಸಕರ ಮೇಳವನ್ನು ಕಟ್ಟಿಕೊಂಡು ಹೋಗಿ ಅರಸರ  ಮೇಲೆ ಒತ್ತಡ  ತಂದರು. ಕರ್ನಾಟಕ ಹೆಸರಿನ ಬಗೆಗೆ ಸಹಮತವುಳ್ಳ ಸದಸ್ಯರು ಉತ್ತರ  ಕರ್ನಾಟಕದಲ್ಲಿ ಇದ್ದಂತೆ, ಮೈಸೂರು ಪ್ರದೇಶದಲ್ಲಿಯೂ  ಇದ್ದರು.

               ತಮ್ಮ ಮೇಲೆ ಒತ್ತಡ ಹೆಚ್ಚದಂತೆ,  ದೇವರಾಜ ಅರಸರು ಕುಶಲ ರಾಜಕಾರಣಿಯ  ಪಾತ್ರ ಆಡಬೇಕೆಂದರು.  ರಾಜಕೀಯದಲ್ಲಿ  ಆದರ್ಶವೇನೂ ಇಲ್ಲ,  ಅದು  ಯಾವುದು ಸಾಧ್ಯವೋ ಅದನ್ನು ಸಾಧಿಸುವ ಕಲೆ ಎನ್ನುವುದನ್ನು ಅವರು ಬಲ್ಲರು.
                 ಹೆಚ್ಚು ಜನ ಸದಸ್ಯರಿಗೆ ಬೇಕಾದರೆ ತಾನೇಕೆ ಅದನ್ನು ಬೇಡ  ಎನ್ನಬೇಕು ಎಂದು  ಅವರು ತಮ್ಮೊಳಗೇ ತರ್ಕಿಸಿದರು. ಆದರೂ, ಅವರ ಮನಸ್ಸಿನಲ್ಲಿ ಈ ರಾಜ್ಯದ  ಹೆಸರು  ಮೈಸೂರೆಂದೇ ಇರಬೇಕೆಂದು ಇದ್ದಿತು.

                ಬಹಳಷ್ಟು ಬಲವಂತ ಬಂದ ಮೇಲೆ ಅವರು ಒಂದು ದಿನ ರುದ್ರಪ್ಪನವರಿಗೆ ಹೇಳಿದರು.'ಆಗಲಿ' ನಿಮ್ಮ ಮಾತಿನಂತೆಯೇ ಆಗಲಿ, ಹೆಚ್ಚು ಜನ ಶಾಸಕರು ಕರ್ನಟಕ ಎಂಬ ಹೆಸರಿನ ಪರವಾಗಿ ಇದ್ದರೆ ನನ್ನ ಅಭ್ಯಂತರವೇನೂ ಇಲ್ಲ'  ಎಂದು ಅವರು ಹೇಳಿದ ತಕ್ಷಣವೇ ರುದ್ರಪ್ಪನವರು  ಹಿಗ್ಗಿ ಹೀರೇಕಾಯಿ ಆದರು.

             "ಆದರೆ, ಈ ಹೆಸರಿನ ಬಗೆಗೆ ಪರಮಾವಧೀ ಒಮ್ಮತ  ಬೇಕು. ವಿಧಾನಸಭೆ ಹಾಗೂ ಪರಿಷತ್ತಿನಲ್ಲಿ ಮೂರನೆಯ ಎರಡು ಭಾಗದಷ್ಟು ಸದಸ್ಯರ ಒಪ್ಪಿಗೆಯಾದರು ಬೇಕು" ಎಂದು ಅರಸರು ಅವರಿಗೆ ಹೇಳಿದರು.
ಈ ಕರಾರು ಹಾಕುವಾಗ, ಕರ್ನಾಟಕ ಹೆಸರಿನ ಬಗೆಗೆ ಅಷ್ಟು  ಬಹುಮತ ಬರಲಾರದೆನ್ನುವ ಭರವಸೆ ಅರಸರಿಗೆ ಇದ್ದು. ಅಕ್ಕಿ ಇದ್ದಂತೆಯೂ ಇರಬೇಕು. ನೆಂಟರು ಸತುಂಷ್ಟರೂ ಆಗಬೇಕು ಎನ್ನುವ  ಅಪೇಕ್ಷೆ ಅವರಿಗೆ ಇದ್ದಿತು.

             ಹೆಸರಿನ ಬಗೆಗೆ ಅರಸರಿಂದ ಒಪ್ಪಿಗೆ ಪಡೆದ ಮೇಲೆ ಕೆ.ಎಂ. ರುದ್ರಪ್ಪನವರು ತಮ್ಮ ಪ್ರಚಾರ ಆಂದ ಆರಂಭಿಸಿದರು. ಆಗ ರಾಮಕೃಷ್ಣ ಹೆಗ್ಗಡೆಯವರು ವಿರೋಧ ಪಕ್ಷದ ನಾಯಕರಾಗಿ ವಿಧಾನ ಪರಿಷತ್ತಿನಲ್ಲಿ ಇದ್ದರು. ಪರಮಾವಧಿ ಬೆಂಬಲ  ಪಡೆಯಲು ಅವರು ಹೆಗ್ಗಡೆಯವರ  ಬೆಂಬಲ ಕೋರಿದರು.
        










          ಸಂಸ್ಥಾ ಕಾಂಗ್ರೆಸ್ಸಿನ ಸದಸ್ಯರ ಬೆಂಬಲವನ್ನಲ್ಲದೆ, ತಾವು ಯಾರಿಗೆ ಹೇಳುವುದು ಸಾಧ್ಯವೋ ಅವರೆಲ್ಲರಿಗೂ ತಾವು ಹೇಳುವುದಾಗಿ ಹೆಗ್ಗಡೆಯವರು  ಮಾತು ಕೊಟ್ಟರು.  

                ರುದ್ರಪ್ಪನವರ ಪ್ರಯತ್ನದಲ್ಲಿ ಆಗ ಬಹು ದೊಡ್ಡ ಧೈರ್ಯ  ಕಾಣಿಸಿಕೊಂಡಿತು. ಅವರು ಎಲ್ಲ ಸದಸ್ಯರನ್ನು ಕಂಡು, ಕರ್ನಾಟಕ ಹೆಸರಿನ ಮಹತ್ವವನ್ನು ಅವರ ಮನಸ್ಸಿನ ಮೇಲೆ ಬಿಂಬಿಸಿದರು.
                 ಹೆಸರಿನ ಪ್ರಸ್ತಾಪ ವಿಧಾನಸಭೆಯಲ್ಲಿ ಬಂದು ಅದರ ಮೇಲೆ  ಮತದಾನ ನಡೆಯಿತು. ಎರಡು ಮೂರಾಂಶ ಮತ ಕರ್ನಾಟಕ ಹೆಸರಿನ ಪರವಾಗಿ ಬಂದ ಮೇಲೆ, ವಿಧಾನ ಪರಿಷತ್ತು ಅದನ್ನೇ ಅನುಸರಿಸಿತು. ಹೆಸರನ್ನು ಒಪ್ಪಿಕೊಳ್ಳಲು ಅರಸರಿಗೆ ಆಗ ಅಭ್ಯಂತರ ಉಳಿಯಲಿಲ್ಲ. ತನಾಗಿಯೇ ಬಂದ ಕಿರಿಟ ಅರಸರ ತಲೆಯನ್ನು  ಅಲಂಕರಿಸಿತು.

                ಕರ್ನಾಟಕ ಎಂಬ ಹೆಸರನ್ನು ತರುವ  ಬಗೆಗೆ ಕೆ.ಎಂ. ರುದ್ರ್ಪಪ್ಪನವರು ಮಾಡಿದ  ಕೆಲಸವನ್ನು ಕನಾಟಕದ ಜನರು ಕೃತಜ್ಞತೆಯಿಂದ ಸ್ಮರಿಸಬೇಕು.




ಸಂಗ್ರಹ :     ಡಾ|| ಪಾಟೀಲ ಪುಟ್ಟಪ್ಪನವರ "ನಮ್ಮ ಚೆಲುವ ಕನ್ನಡ ನಾಡು" ಹೊತ್ತಗೆಯಿಂದ ಆಯ್ಕೆ,      
                     ಉಳ್ಳಾಲ ಪುರಸಭಾ ಗ್ರಂಥಾಲಯ.

Friday, November 12, 2010

***ಸಮುದ್ರ ತಳದ ಕೇಬಲ್ ಗಳು***


ತಂತಿಯ ಮೂಲಕ ಸಂದೇಶ ಕಳಿಸುವ ಟೆಲಿಗ್ರಾಫ್ ಕೇಬಲ್ ಗಳು ತಯಾರಾದದ್ದು 1846ರ ಕಾಲದಲ್ಲಿ. ಇವುಗಳಲ್ಲಿ ಮೋರ್ಸ್ ಭಾಷೆಯಲ್ಲಿ ಕಳುಹಿಸುವ ಸಂದೇಶವೇ ಟೆಲಿಗ್ರಾಫ್. ಭೂ ಖಂಡಗಳ ನಡುವೆ ಕೇಬಲ್ ಗಳನ್ನು ಹಾಕಬೇಕಾಯಿತು.  1850ರಲ್ಲಿ ಇಂಗ್ಲಿಷ್ ಕಾಲುವೆಯ ಕೆಳಗೆ ಮೊತ್ತ ಮೊದಲ ಸಮುದ್ರ ತಡಿಯ ಕೇಬಲ್, ಹಾಸಲಾಯಿತು. ಆದರೆ  ಉಪ್ಪು ನೀರು ಸಮುದ್ರ ಪ್ರವಾಹ ಮತ್ತು ನೀರಿನ ಭಾರೀ ಒತ್ತಡಗಳಿಂದಾಗಿ ಈ ಕೇಬಲ್ ಬೇಗನೆ ಹಾಳಾಯಿತು. ಹಲವಾರು ತಾಂತ್ರಿಕ ಆವಿಷ್ಕಾರಗಳ ಬಳಿಕ  ಸಮುದ್ರದ ಕೆಳಗೆ ಸುರಕ್ಷಿತವಾಗಿ  ಇರಬಲ್ಲ ಕೇಬಲ್ ತಯಾರಾಯಿತು.  ಅಂಟ್ಲಾಂಟಿಕ್ ಸಾಗರದ ಕೆಳಗೆ ಕೇಬಲ್  ಹಾಕಲು ಹಲವಾರು ಪ್ರಯತ್ನಗಳು ನಡೆದವು. ಭಾರೀ ತೂಕದ ಕೇಬಲ್ ಗಳನ್ನು  ಸಮುದ್ರದ ತಳಕ್ಕೆ ಇಳಿಸುತ್ತ ಒಯ್ಯಲು ಬೃಹತ್ ಹಡಗುಗಳ ನಿರ್ಮಾಣವಾಯಿತು. ಕೊನೆಗೂ 1858ರಲ್ಲಿ ಈ ಕೆಲಸ  ಯಶಸ್ವಿಯಾಯಿತು. ಇಂಗ್ಲೆಂಡ್ ನ ಆಗಿನ ರಾಣಿ ವಿಕ್ಟೋರಿಯಾ, ಅಮೆರಿಕಾದ ಅಧ್ಯಕ್ಷ ಬುಚಾನನ್ ಗೆ ಜಗತ್ತಿನ ಮೊತ್ತ ಮೊದಲ  ಸಾಗರಾಂತರ ಟೆಲಿಗ್ರಾಫ್ ಸಂದೇಶ ಕಳಿಸಿದಳು. 99 ಶಬ್ದಗಳ ಈ ಸಂದೇಶ ರವಾನೆಗೊಳ್ಳಲು 18 ಗಂಟೆಗಳೇ ಹಿಡಿದಿದ್ದವು!!!


(ಸಮುದ್ರ ತಳದಲ್ಲಿ ಕೇಬಲ್ ಗಳನ್ನು ಹಾಸಲು ಭಾರೀ ಹಡಗುಗಳ ಸಹಾಯ ಬೇಕು.)

1863ರಲ್ಲಿ  ಮುಂಬಯಿಯಿಂದ ಸೌದಿ ಅರೇಬಿಯಾಗೆ ಸಾಗರತಳದ ಕೇಬಲ್ ಸಂಪರ್ಕ ತಯಾರಾಯಿತು. 1870ರಲ್ಲಿ ನಾಲ್ಕು ಕೇಬಲ್ ಕಂಪೆನಿಗಳು  ಸೇರಿ ಮುಂಬಯಿಯಿಂದ ಲಂಡನ್ ಗೆ  ಕೇಬಲ್ ಹಾಸಿದವು. 20ನೆಯ ಶತಮಾನದಲ್ಲಿ ಟೆಲಿಗ್ರಾಫ್ ಕೇಬಲ್ ಗಳ ಜಾಗದಲ್ಲಿ ಟೆಲಿಫೋನ್ ಕೇಬಲ್ ಗಳನ್ನು ಸಮುದ್ರದ ತಳದಲ್ಲಿ  ಹಾಸಲಾಯಿತು.ಈ ಕೇಬಲ್ ಗಳ ಮೂಲಕ ಶಬ್ದ ತರಂಗಗಳು ಸಾಗಿದವು. ಇಂದು ಸಾಗರತಳದ ಕೇಬಲ್ ಗಳು  ಅಂಟಾರ್ಕ್ಟಿಕಾ  ಬಿಟ್ಟರೆ  ಬೇರೆಲ್ಲ ಭೂಖಂಡಗಳ ನಡುವೆ ಸಂಪರ್ಕ ನಿರ್ಮಿಸಿವೆ.
1980ರ ಬಳಿಕ  ಫೈಬರ್ ಆಪ್ಟಿಕ್ಸ್  ಎಂಬ ವಿಶೇಷ ತಂತಿಗಳ ಬಳಕೆ ಆರಂಭವಾಯಿತು. ಇವುಗಳಲ್ಲಿ ಡಿಜಿಟಲ್ ಮಾಹಿತಿ ಹರಿಯುತ್ತದೆ. ಟೆಲಿಫೋನ್  ಸಂಭಾಷಣೆ ಮಾತ್ರವೇ ಅಲ್ಲ, ಇಂಟರ್ ನೆಟ್ ಮತ್ತು ಖಾಸಾಗಿ ಮಾಹಿತಿಗಳಿಗೂ ಡಿಜಿಟಲ್ ರೂಪದಲ್ಲಿ ಇದರಲ್ಲಿ ಭಾರೀ  ವೇಗದಲ್ಲಿ ಸಾಗುತ್ತವೆ.



1988ರಲ್ಲಿ ಸಾಗರ ತಳದಲ್ಲಿ ಫೈಬರ್ ಆಪ್ಟಿಕ್ಸ್ ಕೇಬಲ್ ಗಳನ್ನು ಬಳಸಲಾಯಿತು. ಇಂದಿನ ಕೆಬಲ್ ಗಳು ಬಳಸಲಾಯಿತು. ಇಂದಿನ ಎಲ್ಲ ಆಧುನಿಕ ಸಂಪರ್ಕ  ತಂತ್ರಜ್ಞಾನದ ಕೇಬಲ್ ಗಳನ್ನು ಬಳಸಲಾಗುತ್ತದೆ. ಹಿಂದಿನ ಕಾಲದ ಕೇಬಲ್ ಗಳು ಸಾಗರ ತಳದಲ್ಲಿ ತುಂಡಾಗುವುದು, ನೀರಿನಿಂದಾಗಿ ಕೆಡುವುದು ಸಾಮಾನ್ಯವೇ  ಆಗಿತ್ತು. ಆಧುನಿಕ ಕೇಬಲ್ ಗಳು ಸುಮಾರು ಏಳು ಸೆಂಟಿಮೀಟರ್ ದಪ್ಪಗೆ  ಇದ್ದು, ಪ್ರತಿಯೊಂದು ಮೀಟರ್ ಕೇಬಲ್ ಹತ್ತು ಕಿಲೋ ಭಾರವಾಗಿರುತ್ತದೆ. ಒಳಗಿನ ಕೇಬಲ್ ಸುತ್ತ ಹಲವಾರು ರಕ್ಷಣಾ  ಹೊದಿಕೆಗಳಿರುತ್ತವೆ.

ಸಾಗರ ತಳದ ಕೇಬಲ್ ನ ಒಳಗೆ ಫೈಬರ್ ಆಪ್ಟಿಕ್ಸ್ ನ ತಂತಿಗಳು ಇರುತ್ತವೆ. ಅದರ ಹೊರಗೆ ಪೆಟ್ರೋಲಿಯಮ್ ಜೆಲ್ಲಿಯನ್ನು ಬಳಿಯಲಾಗಿರುತ್ತದೆ. ಇದನ್ನು ಹಿತ್ತಾಳೆಯ ಟ್ಯೂಬ್ ನ ಒಳಗೆ ಹಾಕಿರಲಾಗುತ್ತದೆ. ಇದರ ಹೊರಗೆ ಪಾಲಿ ಕಾರ್ಬೊನೇಟ್ ಹೊದಿಕೆ. ಇದನ್ನು ಜಲನಿರೋಧಕ ಅಲ್ಯುಮಿನಿಯಮ್ ಕವಚದಿಂದ ರಕ್ಷಿಸಲಾಗುತ್ತದೆ. ಈ ಜೋಡಣೆ  ಸಮುದ್ರ ಪ್ರವಾಹಗಳ  ಒತ್ತಡದಲ್ಲಿ  ನಾಶವಾಗದಂತೆ ಉಕ್ಕಿನ ತಂತಿಗಳ ಹೊರಕವಚ ಇದೆ. ಇದನ್ನು ಮೈಲಾರ್ ಟೇಪ್ ನಿಂದ  ಬಿಗಿಯಲಾಗುತ್ತದೆ. ಎಲ್ಲಕ್ಕಿಂತ ಹೊರಗೆ ಪಾಲಿಥೈಲೀನ್ ಹೊದಿಕೆ ಇರುತ್ತದೆ.

ಷ್ಟೆಲ್ಲಾ  ಭದ್ರತೆ ಇದ್ದರೂ ಸಮುದ್ರ ತಳದ ಕೇಬಲ್ ಗಳು ತುಂಡಾಗಬಹುದು. ಮೀನುಗಾರಿಕೆಯ ಹಡಗುಗಳಿಂದ, ಲಂಗರುಗಳಿಂದ, ಸಮುದ್ರತಳದ ಪ್ರಾಕೃತಿಕ ಪ್ರಕೋಪಗಳಿಂದ ಕೆಡಬಹುದು. ಶಾರ್ಕ್ ಮೀನುಗಳು ಅವುಗಳನ್ನು ಕಚ್ಚಿ  ತುಂಡು ಮಾಡಬಹುದು.

2008ರಲ್ಲಿ ಸುಯೆಜ್ ಕಾಲುವೆಯ ಬಳಿ  ಹಡಗುಗಳಿಂದಾಗಿ ಸಾಗರಾಂತರ ಕೇಬಲ್ ಗಳು ಕಡಿದು ಹೋದವು. ಇದರಿಂದ  ಭಾರತ ಮತ್ತು ಕೊಲ್ಲಿ ದೇಶಗಳ ಸಂಪರ್ಕ ವ್ಯವಸ್ಥೆಗಳು ಮತ್ತು ಇಂಟರ್ ನೆಟ್ ಜಾಲ ಅಸ್ತವ್ಯಸ್ತವಾಗಿದ್ದವು.

***********************

Wednesday, November 10, 2010

***ಮಿಡಿತ***

ಬಾನಂಚಲಿ ಹಾರುವ ಹಕ್ಕಿಗಳಂತೆ
ನೀರಲ್ಲಿ ಈಜಾಡುವ ಮೀನಿನಂತೆ
ಹಚ್ಚಹಸುರಲಿ ಹರಡಿರುವ ಪ್ರಕೃತಿಯಂತೆ
ಕಾಶದಲ್ಲಿ ಹಾರಡಿರುವ ತಾರೆಗಳಂತೆ




             ನನ್ನೀ ಮನಸ್ಸು ಮಿಡಿಯುತಿದೆ
             ನಾನು ಹಕ್ಕಿಗಳಂತೆ ಹಾರುವೆ
             ಮೀನಿನಂತೆ ಈಜಾಡುವೆ
             ಹಸುರಾಗಿ ಹರಡುವೆ
             ತಾರೆಗಳಂತೆ ಮಿನುಗುವೆ..............

***ಚಿಲಿಪಿಲಿ***




ಚಿಲಿ ಪಿಲಿ ಎನ್ನುವ ಹಕ್ಕಿಗಳ ಇಂಚರ
ಜುಳು ಜುಳು ಎನ್ನುವ ನದಿಗಳ ಸಂಚಾರ
ಕೇಳಲು ಎಷ್ಟೊಂದು ಕಿವಿಗೆ ಮಧುರ
ಸವಿಯಲು ಇನ್ನಷ್ಟು ಮನಸ್ಸಿಗೆ ಸುಮಧುರ




ಹಚ್ಚ ಹಸುರಾಗಿ ಹರಡಿರುವ ಪೈರುಗಳು
ನೀರಲ್ಲಿ ಈಜಾಡುತ ಬಳುಕುವ ಮೀನುಗಳು
ಆಕಾಶದಿ ಸಾಲಾಗಿ ಹಾರಾಡುವ ಬೆಳ್ಳಕ್ಕಿಗಳು
ಇದ ನೋಡಿ ನಾನಾದೆ ಬಣ್ಣದ ಬಣ್ಣದ ಚಿಟ್ಟೆಗಳು




ಆಹಾ!!! ಏನೊಂದು ಸುಂದರ ಅನುಭವ
ಮರೆಸುವುದು ಮನಸ್ಸಿನ ಎಲ್ಲಾ ನೋವ
ಇವಲ್ಲಿ ಯಾವುದಾದರೊಂದಾಗಿ  ನಾ ಹುಟ್ಟಿದರೆ ಮಾನವ
ಅಲ್ಲೇ ಇರುತ್ತಿತ್ತು ನನ್ನ ಜೀವ.......!!!!!!!!!!

Monday, November 8, 2010

***ಸಮರ್ಥ ಸದ್ಗುರು ಶ್ರೀ ಸಾಯಿ ಪ್ರಭೋಧ ಸುಧೆ***



*** ಓಂ ಶ್ರೀ ಶಿರಡಿ ಸಾಯಿ ರಾಂ ***

" ಹಿಂದುಗಳ ದೇವರಾದ ಶ್ರೀ ರಾಮನು, ಮಹಮ್ಮದೀಯರ  ದೇವನಾದ ರಹೀಮನೂ ಒಬ್ಬನೇ. ಅವರಲ್ಲಿ ಬೇಧವೇನೂ ಇಲ್ಲ"

"ವಿವಾದಗಳಿಗೆ ಇಳಿಯಬೇಡಿ. ಉಭಯ ಮತದವರೂ ಐಕ್ಯಮತ್ಯವಾಗಿ ಬಾಳಿ"

" ಯೋಗ, ತ್ಯಾಗ, ತಪಸ್ಸು ಮತ್ತು ಜ್ಞಾನ - ಇವೇ  ಮೋಕ್ಷ ಪ್ರಾಪ್ತಿಗೆ  ಮಾರ್ಗಗಳು"

" ಮೋಕ್ಷವನ್ನು ಪಡೆದವರ  ಜೀವನ ನಿರರ್ಥಕ"

" ಅಪಕಾರ ಮಾಡಿದವರಿಗೆ ಉಪಕಾರ ಹೊರೆತು ಅಪಕಾರ ಮಾಡಬೇಡ"

"ಧೃಢವಾದ ವಿಶ್ವಾಸ, ತಾಳ್ಮೆ  ಎಂಬ ಎರಡು ಪೈಸೆಗಳನ್ನೇ ಶಿಷ್ಯರಿಂದ ಗುರು ಅಪೇಕ್ಷಿಸುವ  ದಕ್ಷಿಣೆ"

"ಶಿರ್ಡಿಯನ್ನು  ಪ್ರವೇಶಿಸುವ ಕೂಡಲೇ  ಚಿಂತೆಗಳೆಲ್ಲಾ  ನಿವಾರಣೆಯಾಗುವವು"

ದ್ವಾರಕಾಮಾಯಿ ಶ್ರೀ ಸಾಯಿನಾಥರ ನಿವಾಸ ಸ್ಥಳವಾದ ಮಸೀದಿ ಕಾಮಧೇನು. ಅಲ್ಲಿ ಭಕ್ತರ ಕೋರಿಕೆಗಳೆಲ್ಲಾ ಫಲಿಸುತ್ತವೆ"

ನನ್ನ ಭೌತಿಕ ಶರೀರವನ್ನು ನಾನು ತೊರೆದರೂ ಸಹ ಸದಾ ಜಾಗೃತನಾಗಿದ್ದು ನನ್ನ ಭಕ್ತರ ರಕ್ಷಣೆಯ ವಿಷಯದಲ್ಲಿ ಸರ್ವ ಸನ್ನಧನಾಗಿರುತ್ತೇನೆ"

"ಶರಣು  ಹೊಂದಿದವರನ್ನು ರಕ್ಷಸುವುದೇ ನನ್ನ ವೃತವು"

"ನಿಮ್ಮ ಭಾರವನ್ನು ನನ್ನ ಮೇಲೆ ಹಾಕಿ ಬೀಡಿ. ನಾನು ಹೊರುತ್ತೇನೆ"

ಭಗವಂತನೇ ನನ್ನ ಯಜಮಾನ. ಆತನ ಆಜ್ಞೆ ಪ್ರಕಾರವೇ ನಾನು ನಡೆದುಕೊಳ್ಳುತ್ತೇನೆ "

"ನನ್ನ ದೃಷ್ಟಿಯಲ್ಲಿ ಎಲ್ಲರೂ ಸಮಾನರೆ. ನನ್ನ ಆಜ್ಞೆಯಿಲ್ಲದೆ ಒಂದು ಸಣ್ಣ ಎಲೆಯೂ ಅಲುಗಲಾರದು"

" ನಾನು ಯಾರೊಂದಿಗೂ  ಕೋಪಿಸುವುದಿಲ್ಲ. ತನ್ನ ಮಕ್ಕಳ ಮೇಲೆ ತಾಯಿಯು ಕೋಪಗೊಳ್ಳುವಳೇ? ಸಮುದ್ರವು ನಾನಾ ನದಿಗಳಿಗೆ ತನ್ನ  ನೀರನ್ನು ಹಿಂತಿರುಗಿಸುವಳೇ?"

" ತಾಯಿಗೆ ತಕ್ಕ ಮಕ್ಕಳಾಗಿ ಬಾಳೀ. ನಿಮ್ಮ ಭಂಢಾರವನ್ನು ತುಂಬಿಕೊಳ್ಳಿ"

"ಋಣಾನು ಬಂಧ ಕಾರಣ ಒಬ್ಬರನ್ನೊಬ್ಬರು  ಭೇಟಿಯಾಗುವರು. ಆದಕಾರಣ  ಯಾರೇ ಆಗಲಿ  ಅಥವಾ ಯಾವುದೇ ಪ್ರಾಣಿಯಾಗಲಿ ನಿಮ್ಮ ಬಳಿ ಬಂದಾಗ ಓಡಿಸಬೇಡಿ. ಮಾಡಬೇಕಾದ ಉಪಕಾರ ಮಾಇ. ತಿರಸ್ಕರಿಸಬೇಡಿ. ಆಗ ನೀವು ಮಾಡಿದ  ಪರೋಪಕಾರಕ್ಕಾಗಿ ದೇವರು ಸಂತೋಷಿಸುತ್ತಾನೆ"

"ಯಾರಾದರೂ, ಏನಾದರೂ ನಿಮ್ಮನ್ನು ಯಾಚಿಸಿದರೆ ಅವರ ಕೋರಿಕೆಯನ್ನು ನೆರವೇರಿಸಿ. ನಿಮಗೆ ಆ ಶಕ್ತಿಯಿಲ್ಲದಿದ್ದ ಪಕ್ಷ ಬೇರೆಯವರಿಂದ ಕೊಡಿಸಿ. 'ಇಲ್ಲ'ಎಂದು ಹೇಳಬೇಡಿ. ನಿಮ್ಮಲ್ಲಿ ಕೊಡಲು ಏನೂ ಇಲ್ಲವಾದಲ್ಲಿ, ಇತರರೊಂದಿಗೆ ಕೋಪಗೊಳ್ಳದೆ ನಯವಾಗಿಯೇ 'ಇಲ್ಲ'ವೆನ್ನಿ.  'ಅಯ್ಯೋ ನಮಗೆ ಕೊಡಲು ಇಷ್ಟವಿಲ್ಲ' ಎಂದು ಹೇಳಬಹುದೇ ವಿನಾ ಸುಳ್ಳಾಡಬೇಡಿ"

"ಕಾರ್ಯದಲ್ಲಿ ತೊಡಗಿರಿ. ಭಗವನ್ನಾಮವನ್ನು ಸ್ಮರಿಸಿರಿ. ಸದ್ಗ್ರಂಥಗಳನ್ನು ಪಠಿಸಿರಿ. ದ್ವೇಷಗಳನ್ನಾಗಲೀ, ಜಗಳಗನ್ನಾಗಲೀ ನೀವು ವರ್ಜಿಸಿದಲ್ಲಿ ದೇವರು  ನಿಮ್ಮನ್ನು ರಕ್ಷಿಸುವನು"

"ನಾವು ಅದನ್ನು (ಹಾವನ್ನು) ಸಾಯಿಸಬಾರದು. ಏಕೆಂದರೆ ದೇವರು ಅಣತಿ ನೀಡದಿದ್ದಲ್ಲಿ ಅದು ನಮ್ಮನ್ನು ಸಾಯಿಸುವುದಿಲ್ಲ. ಒಂದು ವೇಳೆ ದೇವರೇನಾದರೂ ಹಾಗೆ ಅಣತಿ ಮಾಡಿದಲ್ಲಿ ಅದನ್ನು ತಪ್ಪಿಸಲು ನಮ್ಮಿಂದ ಅಸಾಧ್ಯ"

"ಸತ್ಯ, ವಿಶ್ವಾಸ, ತಾಳ್ಮೆಗಳನ್ನು ಹೊಂದಿರುವವನ  ಬಳಿಯೇ ನಾನು ಸದಾ ಕಾಲವು ಇರುವೆನು"

"ತನ್ನ ಅಹಂಕಾರವನ್ನು ತ್ಯಜಿಸಿ ನನ್ನ ಪಾದಗಳನ್ನು ಅರ್ಚಿಸಿದವರಿಗೆ ನಾನೆಷ್ಟೋ ಸಹಾಯ ಮಾಡುತ್ತೇನೆ"

"ಸುಳ್ಳು ಹೇಳಬೇಡಿ. ದೇವರಲ್ಲಿ ನಂಬಿಕೆ ಇಡಿ" 

"ನೀವೆಲ್ಲಿದ್ದರೂ, ಏನು ಮಾಡುತ್ತಿದ್ದರೂ ನನಗೆ ತಿಳಿಯುತ್ತದೆ ಎಂಬ ಸಂಗತಿಯನ್ನು ಮರೆಯಬೇಡಿ!!! ನಾನು ಎಲ್ಲರ ಹೃದಯಗಳನ್ನು  ಪಾಲಿಸುತ್ತೇನೆ"

" ಹಸಿದವನಿಗೆ ಅನ್ನ, ದಾಹ ಪೀಡಿತರಿಗೆ ನೀರು ದರಿದ್ರರಿಗೆ ವಸ್ತ್ರ, ಬಳಲಿದವರಿಗೆ  ನಿನ್ನ ಜಗಲಿ, ಕೊಡುತ್ತಾ ಬಾ. ಆಗಲೇ ದೇವರು ಸಂತುಷ್ಟನಾಗುವನು"

"ನಾನು ನನ್ನ ಪ್ರಾಣವನ್ನಾದರೂ ಕೊಟ್ಟೇನು. ವಚನಭಂಗ ಮಾಡಲಾರೆ"

"ಪ್ರಾಣಿಗಳ ಶರೀರಗಳು ಭಿನ್ನವಾಗಿರಬಹುದು. ಆದರೆ ಎಲ್ಲರ ಹಸಿವು ಒಂದೇ"

"ನೀವು ನಿದ್ರಿಸುವಾಗಳು ನಾನು ನಿಮ್ಮನ್ನು ಕಾದು ಕೊಂಡಿರುತ್ತೇನೆ"

" ಭೂಮಿಯು ಬೀಜಗಳನ್ನು ಭರಿಸುವುದು. ಮೋಡಗಳು ಮಳೆಯ ಸುರಿಸುವುದು. ಸೂರ್ಯನು ತನ್ನ ಕಾರಣಗಳಿಂದ ಬೀಜ ಮೊಳೆಯುವಂತೆ ಮಾಡುವನು. ಆದರೆ ಆ ಮೂವರಿಗೂ ಬೆಳೆಯ ಮೇಲೆ ಆಸೆಯಿಲ್ಲ.  ಅದೇ ಮಾದರಿ ಮನುಷ್ಯನೂ ಸಹ ನಿಷ್ಕಾಮನಾಗಿ ಲೋಕ ಹಿತವಾದ ಕಾಯಕಗಳನ್ನು ಮಾಡಬೇಕು. ಅವನು ಹೀಗಿರುವಲ್ಲಿ ದುಃಖವಿರುವುದಿಲ್ಲ. ಮುಕ್ತಿಯೆನ್ನುವುದು ದುಃಖದ ನಾಶ ಅಥವಾ ದುಃಖವಿಲ್ಲದಿರುವಿಕೆ."

*** ಓಂ ಶ್ರೀ ಶಿರಡಿ ಸಾಯಿ ರಾಂ ***


ಸಂಗ್ರಹ(ಗ್ರಂಥಾಲಯ)

Friday, November 5, 2010

***ಸಪ್ತಸ್ವರ***



ಸರಿಗಮಪದನಿ ಸಪ್ತಸ್ವರ
ಅರಳಿತು ಮನದಿ   ಇಂಚರ - 2
ಹಾಡಿತು ಕೋಗಿಲೆ ನಲಿಯಿತು ಮಯೂರ
ಸವಿಯುವ ದುಂಬಿಯ ಝೇಂಕಾರ  
ಸವಿಯುವ ದುಂಬಿಯ ಝೇಂಕಾರ         || ಸರಿಗಮ||(ಪಲ್ಲವಿ)


                                
ಮೂಡಣದೀ ಬೆಳಗಿಹ ಸೂರ್ಯ
ಚೆಲ್ಲಿದ ಕಿರಣದಿ ಉರಿಯೋ ಶೌರ್ಯ
ಚಿಲಿಪಿಲಿ ಎನ್ನುತಾ ಹಾಡಿದೆ ಹಕ್ಕಿ
 ಹರಿದಿದೆ ನದಿಯು ಉಕ್ಕಿ ಉಕ್ಕಿ   
 ಹರಿದಿದೆ ನದಿಯು ಉಕ್ಕಿ ಉಕ್ಕಿ           ||ಸರಿಗಮ||(ಚರಣ-1)






ಸಾಲಾಗಿ ಬರುತಿದೆ ಅಲೆಗಳು
ಅಲೆಯ ಮೇಲೆ ತೇಲಿದೆ ಸ್ವರಗಳು
ಸರಿಗಮಪದನಿ ನಿದಪಮಗರಿಸ
ಸೇರಿತು ಸ್ವರವು ಆಲಿಸೆ ಸಂತಸ
ಸೇರಿತು ಸ್ವರವು ಆಲಿಸೆ ಸಂತಸ          ||ಸರಿಗಮ||(ಚರಣ-2)


ಬಾನಾಡಿ ಮೂಡಿದೆ ಮೋಡಾ
ತಂಪಾಗಿ ನೀ ಭೂಮಿಯೊಳ್ ಬೀಳಾ
ಹನಿ ಹನಿ ಇಬ್ಬನಿ ಮುಟ್ಟಲು ಬುವಿಯ
ತುಂಬಿತು ಮಡಿಲು ಭೂಮಿ ತಾಯ
ತುಂಬಿತು ಮಡಿಲು ಭೂಮಿ ತಾಯ         ||ಸರಿಗಮ ||(ಚರಣ-3)







ಸರಿಗಮಪದನಿ ಸಪ್ತಸ್ವರ
ಅರಳಿತು ಮನದಿ   ಇಂಚರ - 2
ಹಾಡಿತು ಕೋಗಿಲೆ ನಲಿಯಿತು ಮಯೂರ
ಸವಿಯುವ ದುಂಬಿಯ ಝೇಂಕಾರ  
    ಸವಿಯುವ ದುಂಬಿಯ ಝೇಂಕಾರ     
******************


***ಜೀವನ***


ಅಂದು ಜೋರಾಗಿ ಬೀಸುವ ಗಾಳಿಯೊಂದಿಗೆ ಸುರಿಯುತ್ತಿರುವ ಮಳೆ,  ಗುಡುಗು ಮಿಂಚುಗಳ ನಡುವೆ ಮಗುವಿನ ಆಕ್ರಂದನ , ಜೊತೆಗೆ ಅಳಬೇಡ ಎಂದು ಸಮಧಾನಿಸುತ್ತಿರುವ ತಾಯಿ. ಆ ಮಗುವಿನ ನಿಲ್ಲದ ಅಳು ಏನಕ್ಕೋ ತವಕಿಸುತ್ತಿದೆ. ಅದು ಏನು ಎಂಬುದು ಆ ತಾಯಿಗೆ ತಿಳಿಯುತ್ತಿಲ್ಲ. ಅಳು ನಿಲ್ಲಿಸಲು ತಿಳಿಯದ ತಾಯಿಗೆ , ತನ್ನ ಗಂಡನಿಂದ ಸಹಿಸಲಾರದ ಮಾತುಗಳು.  ಆದರೆ ಅದನ್ನು ತಿಳಿಯದೆ ಸಮಾಧಾನಿಸುತ್ತಿರುವ ಆ ತಾಯಿ ಇನ್ನೂ ತಾಯಿಯ ಪ್ರಜ್ಞೆಯೇ ಇಲ್ಲದೆ ಇರುವ 12 ರ ಹರೆಯದ ಹೆಣ್ಣು.


ಜೋ ಜೋ ಲಾಲಿ ನಾ ಹಾಡುವೆ......ಚಿನ್ನ ನಿನ್ನಾ ಮುದ್ದಾಡುವೆ.......



ಶ್ ಶ್ ಶ್...ಸುಮ್ಮನಿರಿ ಮಗು ಮಲಗಿದೆ.....

ಅಂತೂ ಇಂತೂ  ಕೊನೆಗೆ ಅಳು ನಿಲ್ಲಿಸಿದ ಕಂದ ಮಲಗಿದೆ....ಮಲಗಿದೆ......

ಲಾಲಿ ಹಾಡಿದ್ದು ನಾನೇ ಅಂದು ಕೊಳ್ಳಬೇಡಿ......




ಈ ಮೇಲಿನ ಸಾಲುಗಳನ್ನು ಏಕೆ ಬರೆದೆ ಅಂದ್ರೆ, ಏನೂ ತಿಳಿಯದ ಮಕ್ಕಳಿಗೂ ಬಾಲ್ಯದಲ್ಲೇ ಮದುವೆ ಮಾಡಿ ಮಕ್ಕಳನ್ನು ಹೆರುವ ಯಂತ್ರವನ್ನಾಗಿಸುವ ಅಂದಿಗೇ ಮುಗಿದು ಹೋಗಿಲ್ಲ. ಇಂದೂ ಇದೆ..ಅದು ಹಿರಿಯರ ಸಮ್ಮುಖದಲ್ಲಿ ಮಾತ್ರ ನಡೆಯುವಂತದ್ದಲ್ಲ. ಅವರಾಗಿಯೇ ತೆಗೆದು ಕೊಳ್ಳುವ ನಿರ್ಧಾರಗಳು.



ಹೇಗೆ ಅಂತೀರಾ....ಈಗ ಪ್ರೌಢಶಾಲೆ ಬಿಡಿ ಪ್ರಾಥಮಿಕ ತರಗತಿಯಲ್ಲಿರುವಾಗಲೇ ಪ್ರೀತಿ ಬೆಳೆದು  ಮರವಾಗಿ ಬಿಡುತ್ತದೆ.  ಪ್ರೀತಿ, ಮದುವೆ ಎಂಬುದರ ಅರಿವಿಲ್ಲದೆ ಇರುವ ಈ ಮಕ್ಕಳು ಪ್ರೌಢ, ಕಾಲೇಜು ಜೀವನಕ್ಕೆ ಬರುವಾಗ " ಮನೆಯವರು ಹೇಳೊದನ್ನ ಕೇಳಿದ್ರೆ ಈ ಜನುಮದಲ್ಲಿ ನಾವು ಮದುವೆ ಆಗಲ್ಲ. ಬಾ  ಎಲ್ಲಾದರೂ ದೂರ ಹೋಗೋಣ. ಮುಂದೆ ಏನಾಗುತ್ತೋ ಆಮೇಲೆ  ನೋಡಿದರಾಯಿತು. ಸ್ವಲ್ಪ ದಿನ ಮನೆಯವರು ಬೊಬ್ಬೆ ಹಾಕ್ತಾರೆ ಆಮೇಲೆ ಎಲ್ಲಾ ತಾನಾಗಿಯೇ ಸರಿಹೋಗುತ್ತೆ" ಅಂತ ಹೇಳಿ ಅವರಿಗೆ ಇಷ್ಟ ಬಂದ ಹಾಗೆ  ಮದುವೆ ಮಾಡಿಕೊಂಡು ಜೀವನ ಮಾಡ್ತಾರೆ.  ಅದು ಜೀವನ ಅಲ್ಲ. ಆದರೆ ಅವರ ಪ್ರಕಾರ ಅಷ್ಟಕ್ಕೆ ನಾವು ದೊಡ್ಡವರಾಗಿ ಬಿಟ್ವಿ ಅಂತ.



ಇನ್ನು ಏನಪ್ಪಾ ಅಂದ್ರೆ ಜೀವನದ ಬಗ್ಗೆ  ಕಿಂಚಿತ್ತೂ ಕಾಳಜಿ ಇಲ್ಲದೆ,  ಉಯ್ಯಾಲೆ ಕಟ್ಟಿ ಆಡೋ ಸಮಯದಲ್ಲಿ ಅವ್ರೇ ಒಂದು ಮಗುವಿಗೆ ಉಯ್ಯಾಲೆ  ತಯಾರು ಮಾಡೋವರೆಗೂ ಬೆಳೆದು ಬಿಟ್ಟಿರುತ್ತಾರೆ. ಅಂದರೆ ಆಗಲೇ ಆ ಪುಟ್ಟ ಸಂಸಾರಕ್ಕೆ ಪುಟ್ಟ ಮಗು ಬಂದು  ಅದನ್ನ ಬೆಳೆಸೋಕೂ ಆಗದೆ,  ಅಳೋದನ್ನಾ ನಿಲ್ಲಿಸೋಕೂ ಆಗದೆ ಅವರವರಲ್ಲಿಯೇ ಕಲಹ ಉಂಟಾಗುವ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ ಎಂಬುದನ್ನು ತಿಳಿದುಕೊಂಡಿರುವುದಿಲ್ಲ.  ಕೊನೆಗೆ ಈ ಜೀವನವೇ ಬೇಡ ಎಂಬ ನಿರ್ಧಾರಕ್ಕೆ ಬರುತ್ತಾರೆ. ಎಲ್ಲಾ ನಿನ್ನಿಂದಲೇ ಆಗಿದ್ದು, ಹಾಗ ಹೀಗೆ ಎಂದು ಪರಸ್ಪರರನ್ನೇ ದ್ವೇಷಿಸತೊಡಗುತ್ತಾರೆ........



ಈ ವಿಚಾರಗಳ ಬಳಕೆ ಏಕೆ ಮಾಡಿದೆ ಅಂದರೆ ನನ್ನ  ಕಣ್ಣ ಮುಂದೆಯೇ ಇಂತಹ ಅನೇಕ ಘಟನೆಗಳು ನಡೆದಿರುವುದು ಇದೆ.
ಈಗಲೂ ಜೀವಿಸಲು ಕಷ್ಟಪಡುತ್ತಿರುವುದೂ ಇದೆ.

ಓದೋ ಸಮಯದಲ್ಲಿ ಓದುತ್ತಾ, ದುಡಿಯೋ ಸಮಯದಲ್ಲಿ ದುಡಿಯುತ್ತಾ, ಮದುವೆ ಎಂಬ ಸಮಯದಲ್ಲಿ ಮದುವೆ ಮಾಡಿ ಸುಂದರವಾದ ಜೀವನವನ್ನು ಸಾಗಿಸಬೇಕು.
ಎಲ್ಲದ್ದಕ್ಕಿಂತಲೂ ಮುಂಚಿತಾಗಿ ಜೀವನ ಅಂದ್ರೆ ಏನು ಎಂಬುದರ ಬಗ್ಗೆ ಅರಿವು ಮೂಡಿರಬೇಕು.
(ಪವಿತ್ರವಾದ ಈ ದೇಶದಲ್ಲಿ ಹುಟ್ಟಿದ ನಾವು ಈ ದೇಶಕ್ಕೆ ಏನಾದರೂ ಸಾಧಿಸಿ, ಕೀರ್ತಿಯನ್ನು ನೀಡಬೇಕು. ನೀಡಬೇಕಾದ ಗೌರವ ನೀಡಬೇಕು. )
ಸಾಧಿಸಲು ಬೇಕಾದಷ್ಟು ಸಮಯ ಇರುವಾಗ ಆ ಸಮಯವನ್ನು ವ್ಯರ್ಥಮಾಡಬಾರದು.
ಏನೇ ಆದರೂ ಸ್ವಲ್ಪ ಯೋಚಿಸಿ. ಅಥವಾ ತಿಳಿದವರಲ್ಲಿ ಹೇಳಿ ಸಲಹೆ ಪಡೆಯಿರಿ. ಪ್ರೀತಿ ಕುರುಡು ನಿಜ ಆದರೆ ಅದರಿಂದ ಇಡೀ ಜೀವನವೇ ಕುರುಡಾಗಬಾರದು.

(ಬರೆದ ಬರಹದಲ್ಲಿರುವ ತಪ್ಪು ಒಪ್ಪುಗಳಿಗೆ ಕ್ಷಮೆ ಇರಲಿ)

***ಪೃಥ್ವಿಯ ಮಡಿಲು ತುಂಬಿರಲು***


ನಮಿಸುವೆ ತಾಯಿಗೆ, ನಮಿಸುವೆ ಭೂ ಮಾತೆಗೆ
ಹಚ್ಚಹಸುರಿನ ಮಡಿಲು ತುಂಬಿ ಕಂಗೊಳಿಸೆ,
ಮೈಮರೆತು ನಾನಲ್ಲೆ ಶಿಲೆಯಾದೆ....ನಮಿಸುವೆ  ತಾಯೆ ನಿನಗೆ.




ತಣಿದ ಮೋಡ ಮಳೆಯಾಗಿ
ಬರಡು ಭೂಮಿ ಹಸುರಾಗಿ 
ಸಾಗರವ ಸೇರಿತು ನದಿಯಾಗಿ

ನಾ ಇಲ್ಲಿ ವಿಹಾರಿಯಾಗಲು ಪಕ್ಷಿಯಾಗ ಬಯಸುವೆ,
ನಾ ಇಲ್ಲಿ ನಡೆದಾಡಲು ಕಾಮಧೇನುವಾಗ ಬಯಸುವೆ,
ಪ್ರತಿ ಕ್ಷಣವನ್ನು ಕಳೆಯಲು ಗಾಳಿಯಾಗ ಬಯಸುವೆ,
ಹಚ್ಚಹಸುರಾಗಿ ಆಕರ್ಷಿಸಲು ಹುಲ್ಲಾಗ ಬಯಸುವೆ,
ಇದು ನನ್ನದು , ಇದು ನಾನೇ ಎನ್ನಲು ಭೂಮಿತಾಯಿ ಆಗಲು ಬಯಸುವೆ.........***




ಪ್ರಕೃತಿ ಸೌಂದರ್ಯಕ್ಕಿಂತ ಮಿಗಲಾದ ಸೌಂದರ್ಯ ಏನಿದೆ ಗೆಳೆಯ ???

Thursday, November 4, 2010

***ಸವಿ ನೆನಪು***

ಮರುಕಳಿಸಿದೆ ನಿನ್ನ ನೆನಪು
ಮರೆಯಲಾಗದ ಆ ಸವಿನೆನಪು

ನೀ ಕರೆದಾಗ ನಾ ಬರಲಿಲ್ಲ;
ನಾ ಕರೆಯಲು ಮುಂದಾದಾಗ ನೀನಲ್ಲಿಲ್ಲ.
ನಿನ್ನ ಪ್ರೀತಿಯ ಕೂಗ ನಾತಿಳಿಯಲಿಲ್ಲ;
ಪ್ರೀತಿಯ ಅರಿವು ನನಗಂದು ಇರಲಿಲ್ಲ.

ಮರುಕಳಿಸಿದೆ ನಿನ್ನ ನೆನಪು
ಮರೆಯಲಾಗದ ಆ ಸವಿನೆನಪು
ಮತ್ತೆ ಮತ್ತೆ ನೀ ನನ್ನ ಕಾಡಿದೆ ಬೇಡಿದೆ
"ನನ್ನ ಪ್ರೀತಿಸು" ಎಂದು ,
ಇನ್ನೊಂದು ಭಾರಿ ಕೂಗು "ನನ್ನ ಪ್ರೀತಿಸು" ಎಂದು
ನಾ ಹೇಳುವೆ ನನ್ನ ಇನಿಯ ನೀನೇ ಎಂದು

ಎಲ್ಲಿರುವೆ ನೀ ಎಲ್ಲಿ ಹೋದೆ,
ಏಕೆ ಹೀಗೆ ಮರೆಯಾದೆ
ನಾ ಏನು ಮಾಡಿದೆ ಎಂದು
ನನ್ನಿಂದ ನೀ ದೂರಾದೆ ಇಂದು

ಓ.......ಇನಿಯಾ....................
ಮರುಕಳಿಸಿದೆ ನಿನ್ನ ನೆನಪು
ಮರೆಯಲಾಗದ ಆ ಸವಿನೆನಪು.....
ಆ ....ಸವಿನೆನಪು.......

Tuesday, November 2, 2010

ಪರಿಚಯ

ನಮಸ್ತೆ ನನ್ನ ಎಲ್ಲಾ ಪ್ರಿಯ ಗೆಳೆಯರಿಗೆ,
ಪರಿಚಯ ಅಂದ ಕೂಡಲೇ ....ಒಂದು ಕುತೂಹಲ ಮೂಡುವುದು ಸಹಜ ನಮ್ಮಲ್ಲಿ.. ಯಾರಿವರು? , ಏನಿರಬಹುದು ? ಹೀಗೆ ಹತ್ತು ಹಲವಾರು ಪ್ರಶ್ನೆಗಳು. ಆದ್ರೆ ನನ್ನ ಬಗ್ಗೆ ಹೇಳೋವಂತಹುದು ನನ್ನಲ್ಲಿ ಹಾಗೇನೂ ವಿಶೇಷತೆಗಳು ಇಲ್ಲ. ಯಾಕೆಂದರೆ ನನ್ನ ಬಗ್ಗೆ ನೀವೇ ಹೇಳಬೇಕು. ಆದ್ರೂ ಅದಕ್ಕಿಂತ ಮುಂಚಿತವಾಗಿ, ನಾನುಯಾರು ಅನ್ನೋದನ್ನಾದ್ರೂ ತಿಳಿಸಲೇ ಬೇಕಲ್ವಾ....ನನ್ನ ಹೆಸರು ಸ್ವಪ್ನಾ. ನಾನು ಮೂಲತಃ ಮಂಗಳೂರು ತಾಲೂಕಿನ ಉಳ್ಳಾಲ ಗ್ರಾಮದವಳು. ವಿದ್ಯಾಭ್ಯಾಸ ಎಲ್ಲಾ ಅಲ್ಲೇ. ಅಕ್ಕರೆಯಿಂದ ಕೂಡಿದ ಕುಟುಂಬದಲ್ಲಿ ನಾನು ನನ್ನ ತಾಯಿಗೆ ಮೂರನೇ ಮಗಳು. ಜೀವನದಲ್ಲಿ ಯಾರ ಹಂಗೂ ಇಲ್ಲದೆ ನನ್ನ ಸ್ವ ಸಂಪಾದನೆಯಲ್ಲಿ ನನ್ನ ಜೀವನವನ್ನು ಸಾಗಿಸಿ ನನ್ನ ತಾಯಿಯನ್ನ ಪ್ರೀತಿಯಿಂದ ನೋಡ್ಕೋಬೇಕು. ನನ್ನ ಮೊದಲ ದೇವರೇ ಅಮ್ಮ. ನನ್ನ ಪ್ರತಿ ಹೆಜ್ಜೆಗೂ ಅಮ್ಮನ ಆಶಿರ್ವಾದ, ಪ್ರೋತ್ಸಾಹವೇ ಕಾರಣ.
ಸಂಗೀತ ಅಂದ್ರೆ ತುಂಬಾ ಇಷ್ಟ. ಬಿಡುವಿನ ಸಮಯದಲ್ಲಿ ಸಂಗೀತವನ್ನ ಆಲಿಸೋದು, ಸಮುದ್ರ ತೀರದಲ್ಲಿ ಕೂರುವುದು, ಸುಂದರ ವಾತಾವರಣವನ್ನು ನೋಡುತ್ತಾ ಸವಿಯೋದು, ಕುಣಿಯುವುದು, ಹಾಗೆಯೇ ನನಗೆ ತಿಳಿದ ವಿಷಯವನ್ನು ಇತರರಿಗೆ ತಿಳಿಸುವುದು, ಮನೆಯವರೊಂದಿಗೆ ದೂರ ಪ್ರಯಾಣ, ಇವಲ್ಲಾ ನನಗೆ ತುಂಬಾನೆ ಇಷ್ಟ. ಸ್ನೇಹಿತರು ಸಾಕಷ್ಟು ಇದ್ದರೂ, ನನ್ನ ಬಾಲ್ಯದ ಜೀವನದಲ್ಲಿದ್ದ ಅಂದರೆ ಪ್ರಾಥಮಿಕ ಶಾಲಾ ಜೀವನದಲ್ಲಿ ಇದ್ದ ಗೆಳೆಯರ ನೆನಪು ಇನ್ನೂ ಚಿರವಾಗಿದೆ. ಕೆಲವೊಂದು ಸಾರಿ ಹಿಂದಿ ಕವಯಿತ್ರಿ ಸುಭದ್ರ ಕುಮಾರಿ ಚೌಹಾನ್ ರವರ ಪದ್ಯ ನೆನಪಾಗುತ್ತೆ ...................
ಈಗ್ಲೇ ಜಾಸ್ತಿ ಆಯ್ತು ಅನ್ಸುತ್ತೆ ನನ್ನ ಮಾತು...ಇನ್ನು ಏನಾದ್ರೂ ಕೇಳೋದಿದ್ರೆ ಕೇಳಿ..........

ಸದಾ ಪ್ರೀತಿಯಿಂದ ಶುಭ ಹಾರೈಸೋ.......ಸ್ವಪ್ನಾ.ಎನ್ ಶ್ರೀಯಾನ್.