Monday, November 8, 2010

***ಸಮರ್ಥ ಸದ್ಗುರು ಶ್ರೀ ಸಾಯಿ ಪ್ರಭೋಧ ಸುಧೆ***



*** ಓಂ ಶ್ರೀ ಶಿರಡಿ ಸಾಯಿ ರಾಂ ***

" ಹಿಂದುಗಳ ದೇವರಾದ ಶ್ರೀ ರಾಮನು, ಮಹಮ್ಮದೀಯರ  ದೇವನಾದ ರಹೀಮನೂ ಒಬ್ಬನೇ. ಅವರಲ್ಲಿ ಬೇಧವೇನೂ ಇಲ್ಲ"

"ವಿವಾದಗಳಿಗೆ ಇಳಿಯಬೇಡಿ. ಉಭಯ ಮತದವರೂ ಐಕ್ಯಮತ್ಯವಾಗಿ ಬಾಳಿ"

" ಯೋಗ, ತ್ಯಾಗ, ತಪಸ್ಸು ಮತ್ತು ಜ್ಞಾನ - ಇವೇ  ಮೋಕ್ಷ ಪ್ರಾಪ್ತಿಗೆ  ಮಾರ್ಗಗಳು"

" ಮೋಕ್ಷವನ್ನು ಪಡೆದವರ  ಜೀವನ ನಿರರ್ಥಕ"

" ಅಪಕಾರ ಮಾಡಿದವರಿಗೆ ಉಪಕಾರ ಹೊರೆತು ಅಪಕಾರ ಮಾಡಬೇಡ"

"ಧೃಢವಾದ ವಿಶ್ವಾಸ, ತಾಳ್ಮೆ  ಎಂಬ ಎರಡು ಪೈಸೆಗಳನ್ನೇ ಶಿಷ್ಯರಿಂದ ಗುರು ಅಪೇಕ್ಷಿಸುವ  ದಕ್ಷಿಣೆ"

"ಶಿರ್ಡಿಯನ್ನು  ಪ್ರವೇಶಿಸುವ ಕೂಡಲೇ  ಚಿಂತೆಗಳೆಲ್ಲಾ  ನಿವಾರಣೆಯಾಗುವವು"

ದ್ವಾರಕಾಮಾಯಿ ಶ್ರೀ ಸಾಯಿನಾಥರ ನಿವಾಸ ಸ್ಥಳವಾದ ಮಸೀದಿ ಕಾಮಧೇನು. ಅಲ್ಲಿ ಭಕ್ತರ ಕೋರಿಕೆಗಳೆಲ್ಲಾ ಫಲಿಸುತ್ತವೆ"

ನನ್ನ ಭೌತಿಕ ಶರೀರವನ್ನು ನಾನು ತೊರೆದರೂ ಸಹ ಸದಾ ಜಾಗೃತನಾಗಿದ್ದು ನನ್ನ ಭಕ್ತರ ರಕ್ಷಣೆಯ ವಿಷಯದಲ್ಲಿ ಸರ್ವ ಸನ್ನಧನಾಗಿರುತ್ತೇನೆ"

"ಶರಣು  ಹೊಂದಿದವರನ್ನು ರಕ್ಷಸುವುದೇ ನನ್ನ ವೃತವು"

"ನಿಮ್ಮ ಭಾರವನ್ನು ನನ್ನ ಮೇಲೆ ಹಾಕಿ ಬೀಡಿ. ನಾನು ಹೊರುತ್ತೇನೆ"

ಭಗವಂತನೇ ನನ್ನ ಯಜಮಾನ. ಆತನ ಆಜ್ಞೆ ಪ್ರಕಾರವೇ ನಾನು ನಡೆದುಕೊಳ್ಳುತ್ತೇನೆ "

"ನನ್ನ ದೃಷ್ಟಿಯಲ್ಲಿ ಎಲ್ಲರೂ ಸಮಾನರೆ. ನನ್ನ ಆಜ್ಞೆಯಿಲ್ಲದೆ ಒಂದು ಸಣ್ಣ ಎಲೆಯೂ ಅಲುಗಲಾರದು"

" ನಾನು ಯಾರೊಂದಿಗೂ  ಕೋಪಿಸುವುದಿಲ್ಲ. ತನ್ನ ಮಕ್ಕಳ ಮೇಲೆ ತಾಯಿಯು ಕೋಪಗೊಳ್ಳುವಳೇ? ಸಮುದ್ರವು ನಾನಾ ನದಿಗಳಿಗೆ ತನ್ನ  ನೀರನ್ನು ಹಿಂತಿರುಗಿಸುವಳೇ?"

" ತಾಯಿಗೆ ತಕ್ಕ ಮಕ್ಕಳಾಗಿ ಬಾಳೀ. ನಿಮ್ಮ ಭಂಢಾರವನ್ನು ತುಂಬಿಕೊಳ್ಳಿ"

"ಋಣಾನು ಬಂಧ ಕಾರಣ ಒಬ್ಬರನ್ನೊಬ್ಬರು  ಭೇಟಿಯಾಗುವರು. ಆದಕಾರಣ  ಯಾರೇ ಆಗಲಿ  ಅಥವಾ ಯಾವುದೇ ಪ್ರಾಣಿಯಾಗಲಿ ನಿಮ್ಮ ಬಳಿ ಬಂದಾಗ ಓಡಿಸಬೇಡಿ. ಮಾಡಬೇಕಾದ ಉಪಕಾರ ಮಾಇ. ತಿರಸ್ಕರಿಸಬೇಡಿ. ಆಗ ನೀವು ಮಾಡಿದ  ಪರೋಪಕಾರಕ್ಕಾಗಿ ದೇವರು ಸಂತೋಷಿಸುತ್ತಾನೆ"

"ಯಾರಾದರೂ, ಏನಾದರೂ ನಿಮ್ಮನ್ನು ಯಾಚಿಸಿದರೆ ಅವರ ಕೋರಿಕೆಯನ್ನು ನೆರವೇರಿಸಿ. ನಿಮಗೆ ಆ ಶಕ್ತಿಯಿಲ್ಲದಿದ್ದ ಪಕ್ಷ ಬೇರೆಯವರಿಂದ ಕೊಡಿಸಿ. 'ಇಲ್ಲ'ಎಂದು ಹೇಳಬೇಡಿ. ನಿಮ್ಮಲ್ಲಿ ಕೊಡಲು ಏನೂ ಇಲ್ಲವಾದಲ್ಲಿ, ಇತರರೊಂದಿಗೆ ಕೋಪಗೊಳ್ಳದೆ ನಯವಾಗಿಯೇ 'ಇಲ್ಲ'ವೆನ್ನಿ.  'ಅಯ್ಯೋ ನಮಗೆ ಕೊಡಲು ಇಷ್ಟವಿಲ್ಲ' ಎಂದು ಹೇಳಬಹುದೇ ವಿನಾ ಸುಳ್ಳಾಡಬೇಡಿ"

"ಕಾರ್ಯದಲ್ಲಿ ತೊಡಗಿರಿ. ಭಗವನ್ನಾಮವನ್ನು ಸ್ಮರಿಸಿರಿ. ಸದ್ಗ್ರಂಥಗಳನ್ನು ಪಠಿಸಿರಿ. ದ್ವೇಷಗಳನ್ನಾಗಲೀ, ಜಗಳಗನ್ನಾಗಲೀ ನೀವು ವರ್ಜಿಸಿದಲ್ಲಿ ದೇವರು  ನಿಮ್ಮನ್ನು ರಕ್ಷಿಸುವನು"

"ನಾವು ಅದನ್ನು (ಹಾವನ್ನು) ಸಾಯಿಸಬಾರದು. ಏಕೆಂದರೆ ದೇವರು ಅಣತಿ ನೀಡದಿದ್ದಲ್ಲಿ ಅದು ನಮ್ಮನ್ನು ಸಾಯಿಸುವುದಿಲ್ಲ. ಒಂದು ವೇಳೆ ದೇವರೇನಾದರೂ ಹಾಗೆ ಅಣತಿ ಮಾಡಿದಲ್ಲಿ ಅದನ್ನು ತಪ್ಪಿಸಲು ನಮ್ಮಿಂದ ಅಸಾಧ್ಯ"

"ಸತ್ಯ, ವಿಶ್ವಾಸ, ತಾಳ್ಮೆಗಳನ್ನು ಹೊಂದಿರುವವನ  ಬಳಿಯೇ ನಾನು ಸದಾ ಕಾಲವು ಇರುವೆನು"

"ತನ್ನ ಅಹಂಕಾರವನ್ನು ತ್ಯಜಿಸಿ ನನ್ನ ಪಾದಗಳನ್ನು ಅರ್ಚಿಸಿದವರಿಗೆ ನಾನೆಷ್ಟೋ ಸಹಾಯ ಮಾಡುತ್ತೇನೆ"

"ಸುಳ್ಳು ಹೇಳಬೇಡಿ. ದೇವರಲ್ಲಿ ನಂಬಿಕೆ ಇಡಿ" 

"ನೀವೆಲ್ಲಿದ್ದರೂ, ಏನು ಮಾಡುತ್ತಿದ್ದರೂ ನನಗೆ ತಿಳಿಯುತ್ತದೆ ಎಂಬ ಸಂಗತಿಯನ್ನು ಮರೆಯಬೇಡಿ!!! ನಾನು ಎಲ್ಲರ ಹೃದಯಗಳನ್ನು  ಪಾಲಿಸುತ್ತೇನೆ"

" ಹಸಿದವನಿಗೆ ಅನ್ನ, ದಾಹ ಪೀಡಿತರಿಗೆ ನೀರು ದರಿದ್ರರಿಗೆ ವಸ್ತ್ರ, ಬಳಲಿದವರಿಗೆ  ನಿನ್ನ ಜಗಲಿ, ಕೊಡುತ್ತಾ ಬಾ. ಆಗಲೇ ದೇವರು ಸಂತುಷ್ಟನಾಗುವನು"

"ನಾನು ನನ್ನ ಪ್ರಾಣವನ್ನಾದರೂ ಕೊಟ್ಟೇನು. ವಚನಭಂಗ ಮಾಡಲಾರೆ"

"ಪ್ರಾಣಿಗಳ ಶರೀರಗಳು ಭಿನ್ನವಾಗಿರಬಹುದು. ಆದರೆ ಎಲ್ಲರ ಹಸಿವು ಒಂದೇ"

"ನೀವು ನಿದ್ರಿಸುವಾಗಳು ನಾನು ನಿಮ್ಮನ್ನು ಕಾದು ಕೊಂಡಿರುತ್ತೇನೆ"

" ಭೂಮಿಯು ಬೀಜಗಳನ್ನು ಭರಿಸುವುದು. ಮೋಡಗಳು ಮಳೆಯ ಸುರಿಸುವುದು. ಸೂರ್ಯನು ತನ್ನ ಕಾರಣಗಳಿಂದ ಬೀಜ ಮೊಳೆಯುವಂತೆ ಮಾಡುವನು. ಆದರೆ ಆ ಮೂವರಿಗೂ ಬೆಳೆಯ ಮೇಲೆ ಆಸೆಯಿಲ್ಲ.  ಅದೇ ಮಾದರಿ ಮನುಷ್ಯನೂ ಸಹ ನಿಷ್ಕಾಮನಾಗಿ ಲೋಕ ಹಿತವಾದ ಕಾಯಕಗಳನ್ನು ಮಾಡಬೇಕು. ಅವನು ಹೀಗಿರುವಲ್ಲಿ ದುಃಖವಿರುವುದಿಲ್ಲ. ಮುಕ್ತಿಯೆನ್ನುವುದು ದುಃಖದ ನಾಶ ಅಥವಾ ದುಃಖವಿಲ್ಲದಿರುವಿಕೆ."

*** ಓಂ ಶ್ರೀ ಶಿರಡಿ ಸಾಯಿ ರಾಂ ***


ಸಂಗ್ರಹ(ಗ್ರಂಥಾಲಯ)

No comments:

Post a Comment